-->

Saturday, February 5, 2011

ಜ್ಯೋತಿ ಗುರುಪ್ರಸಾದ್‌ ರ ಜೋಲಿ ಲಾಲಿ ಅಂಕಣ ಪುಸ್ತಕ ರೂಪದಲ್ಲಿ

‘ವಾರ್ತಾಭಾರತಿ’‘ಯ ಜನಪ್ರಿಯ ಅಂಕಣಕಾರರಲ್ಲೊಬ್ಬರಾದ, ಖ್ಯಾತ ಕವಯತ್ರಿ-ಲೇಖಕಿ ಜ್ಯೊತಿ ಗುರುಪ್ರಸಾದ್ ಅವರ ಅಂಕಣ ಜೋಲಿ-ಲಾಲಿ’  ‘’‘ಇದೀಗ ಪುಸ್ತಕ ರೂಪದಲ್ಲಿ ಬಂದಿದೆ. ಬೆಂಗಳೂರಿನ ದೇಸಿ ಪುಸ್ತಕ ದವರು ಇದನ್ನು ಪ್ರಕಟಿಸಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿ , ಮಹಿಳೆ ಮತ್ತಿತರ ವಿಷಯಗಳ ಕುರಿತು ಅತ್ಯಂತ ಆಪ್ತವಾಗಿ, ಸರಳವಾಗಿ ಬರೆದು ವಾರ್ತಾಭಾರತಿಯ ಅಪಾರ ಓದುಗರನ್ನು ತಮ್ಮ ಅಭಿಮಾನಿಯಾಗಿಸಿಕೊಂಡವರು ಜ್ಯೋತಿ ಗುರುಪ್ರಸಾದ್. ಹಲವು ಕಾಲೇಜುಗಳಲ್ಲಿ ಕನ್ನಡ-ಇಂಗ್ಲಿಷ್ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿರುವ ಜ್ಯೊತಿ ಗುರುಪ್ರಸಾದ್‌ರ ಚುಕ್ಕಿ’ ‘’‘ಕವನ ಸಂಕಲನಕ್ಕೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಬಂದಿದೆ.ಇವರ ಮಾಯಾಪೆಟ್ಟಿಗೆ ಕವನ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಪ್ರಶಸ್ತಿ , ಕನ್ನಡ ಸಾಹಿತ್ಯ ಪರಿಷತ್‌ನ ನೀಲಗಂಗಾ ದತ್ತಿ ಪ್ರಶಸ್ತಿ ಹಾಗು ನಿರತ ಸಾಹಿತ್ಯ ಪ್ರಶಸ್ತಿಗಳು ಸಂದಿವೆ. ಜ್ಯೋತಿ ಅವರ ಈ ಕ್ಷಣ‘  ಅಂಕಣ ಸಂಕಲನಕ್ಕೆ ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ.ಪ್ರಶಸ್ತಿ ದೊರೆತಿದೆ. 

ತಮ್ಮ ಹೊಸ ಕೃತಿಯಲ್ಲಿ ಜ್ಯೋತಿ ಗುರುಪ್ರಸಾದ್ ಅವರು ಬರೆದಿರುವ ಮುನ್ನುಡಿಯ ಕೆಲವು ಸಾಲುಗಳು ಇಲ್ಲಿವೆ...

.....ಎಂಟು ವರ್ಷಗಳ ಹಿಂದೆ ಆರಂಭವಾಗಿರುವ ‘ವಾರ್ತಾಭಾರತಿ’ ದಿನಪತ್ರಿಕೆ ಇಂದು ಪ್ರಗತಿಪರ ನಿಲುವಿನ ದಿನಪತ್ರಿಕೆ.ಈ ಪತ್ರಿಕೆ ಪ್ರತಿನಿಧಿಸುವ ಮನುಷ್ಯಪರ ಕಾಳಜಿಗಳನ್ನು ನಾನು ಗಮನಿಸುತ್ತಲೇ ಇದ್ದೆ. ಈ ಪತ್ರಿಕೆಗೆ ನಿಯಮಿತವಾಗಿ ಏನನ್ನಾದರೂ ಬರೆಯುವುದರ ಮೂಲಕ ನನ್ನ ಪಾಲನ್ನು ಇದರಲ್ಲಿ ಸೇರಿಸಬೇಕೆನಿಸುತ್ತಿತ್ತು. ನನ್ನ ಈ ಇಚ್ಛೆಗೆ ತಕ್ಕಂತೆ ವಾರ್ತಾಭಾರತಿ’‘ಯ ಸಂಪಾದಕೀಯ ಬಳಗದವರೂ-ಸಾಹಿತ್ಯ ವಲಯದ ಆಪ್ತರೂ ಆಗಿರುವ ಬಿ.ಎಂ.ಬಶೀರ್ ಅವರಿಂದ ನಾನು ವಾರ್ತಾಭಾರತಿ’‘ಗಾಗಿ ಪ್ರತಿವಾರ ಬರೆಯಬಹುದೆಂಬ ವಿಶ್ವಾಸವೂ ದೊರೆಯಿತು.ಅದಕ್ಕೆ ತಕ್ಕಂತೆ ವಾರ್ತಾಭಾರತಿಯ ಪ್ರಧಾನ ಸಂಪಾದಕರಾಗಿ ಪೋಷಿಸುತ್ತಿರುವ ಮಾನ್ಯ ಎ.ಎಸ್.ಪುತ್ತಿಗೆಯವರ ಸಹಮತವೂ ಸಂಪಾದಕೀಯ ಬಳಗದ ಸತೀಶ್ ಮುಂತಾದವರ ಸಹಕಾರವೂ ದೊರೆಯಿತು.....ಪ್ರೀತಿಯ ‘ವಾರ್ತಾಭಾರತಿ’ಪತ್ರಿಕೆಯ ಇಡೀ ಬಳಗಕ್ಕೆ ನನ್ನ ತುಂಬು ಹೃ ದಯದ ಕೃತಜ್ಞತೆ. ವಾರ್ತಾಭಾರತಿ’ಯಲ್ಲಿ ನನ್ನ ಈ ಜೋಲಿ ಲಾಲಿ ಅಂಕಣ ಬರಹದ ಯಾತ್ರೆ ಇನ್ನೂವರೆಗೂ ಸಾಗುತ್ತಿದೆ.ನನ್ನ ಚಿಂತನೆಯನ್ನೂ ಬದ್ಧತೆಯನ್ನೂ ಇನ್ನಷ್ಟು ಹರಿತಗೊಳಿಸಲು ಸಹಕಾರಿಯಾಗಿದೆ.....
  ಪುಸ್ತಕ ಪ್ರಕಾಶಕರು - ದೇಸಿ ಪುಸ್ತಕ,
# 121, 13ನೆ ಮುಖ್ಯರಸ್ತೆ, ಎಂ.ಸಿ.ಲೇ ಔಟ್,
ವಿಜಯ ನಗರ,ಬೆಂಗಳೂರು-40.ದೂರವಾಣಿ:080-23153558


No comments:

Post a Comment